Slide
Slide
Slide
previous arrow
next arrow

ಅವ್ಯವಹಾರ ತನಿಖೆಗೆ ಆಗ್ರಹಿಸಿ ಇಂದು ಜೊಯಿಡಾ ಬಂದ್‌ಗೆ ಕರೆ

300x250 AD

ಜೊಯಿಡಾ: ತಾಲೂಕಿನ ಜೊಯಿಡಾ ಸೇವಾ ಸಹಕಾರಿ ಸಂಘದಲ್ಲಿ 12 ಕೋಟಿ ಅವ್ಯವಹಾರ ನಡೆದ ಬಗ್ಗೆ ಸರಿಯಾಗಿ ತನಿಖೆ ನಡೆಯತ್ತಿಲ್ಲ. ಕೂಡಲೇ ಈ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ವಿವಿಧ ಸಂಘಟನೆಗಳು ಮತ್ತು ಸ್ಥಳೀಯರು ಇಂದು ರಸ್ತಾರೋಖೋ ಹಾಗೂ ಜೊಯಿಡಾ ಬಂದ್‌ಗೆ ಕರೆನೀಡಿದ್ದಾರೆ.

ಜೊಯಿಡಾ ಸಹಕಾರಿ ಸಂಘದಲ್ಲಿ 12 ಕೋಟಿ ಅವ್ಯವಹಾರ ನಡೆದಿದೆ. ಈ ಹಿಂದೆಯಿ0ದಲೂ ಸಹಕಾರಿ ಸಂಘದ ಅಧಿಕಾರಿಯಾಗಿದ್ದ ಎಸ್.ಪಿ.ಸಜ್ಜನ ಅವರನ್ನೇ ತನಿಖಾಧಿಕಾರಿಯಾಗಿ ಒಪ್ಪಿಸಿರುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ ಈ ಅವ್ಯವಹಾರದ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು. ಬಡಜನರ ದುಡ್ಡು ತಿಂದವರನ್ನು ಸುಮ್ಮನೆ ಬಿಡಬಾರದು. ಸರ್ಕಾರ ಈ ಬಗ್ಗೆ ಕೂಡಲೇ ಲಕ್ಷ್ಯ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊಯಿಡಾ ಸಹಕಾರಿ ಸಂಘದಲ್ಲಿ ಜನ ಇಟ್ಟ ಹಣ ವಾಪಸ್ಸು ಸಿಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top